Thursday, November 27, 2008

ಮುಕ್ತ ಮುಕ್ತ ಶೀರ್ಷಿಕೆ ಗೀತೆ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ...

ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿನಿಂತ ಕಾಣುವ ಕರುಣಾಮಯಿಯ...

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವ ಮುಕ್ತ...

ಇರುಳ ವಿರುದ್ದ ಬೆಳಕಿನ ಯುದ್ದ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ...

ಅದ್ಭುತ ಸಾಹಿತ್ಯ... :)..


=======================================

Muktha Muktha Title Track

Manna Thindu Sihi Hanna Koduva Mara Needi Needi Muktha
Beva Agiva Savigaanada Hakki Haadi Muktha Muktha..

Hasira Tholinali Benkiya Koosa Porevudu Thaayiya Hrudaya
Mareyuvudunte Mareyalinintha Kaanuva Karunaamayiya..

Thannaavaranave Seremaneyaadare Jeevake Elliya Mukthi
Belakina Batteya Bichchuva Jyothige Bayale Jeevan Muktha..

Irula Viruddha Belakina Yuddha Koneyillada Kaadaata
Thadeye Illadhe Nadeyale Beku Solillada Horataa..

Amazing Lyrics...

Friday, October 31, 2008

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ..

ನಾಳೆ ೫೩ನೆ ರಾಜ್ಯೋತ್ಸವ. ಕನ್ನಡಿಗರಿಗೆಲ್ಲ ಇದು ಶುಭದಿನ. ನಮ್ಮ ಕನ್ನಡ ನಾಡು ರಚನೆಯಾದ ದಿನ. ಈ ರಾಜ್ಯೋತ್ಸವ ಇನ್ನೂ ವಿಶಿಷ್ಟವಾದದ್ದು. ಏಕೆಂದರೆ ನಮ್ಮ ಮಧುರವಾದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಕೇಂದ್ರ ಸರ್ಕಾರವು ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವಕ್ಕಾಗಿ ಈ ಚಿನ್ನದಂಥ ಉಡುಗೊರೆಯನ್ನು ನೀಡಿದೆ. ನಾಲ್ಕು ವರ್ಷಗಳಿಂದ ಕನ್ನಡಿಗರು ಮಾಡುತ್ತಿರುವ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಂತಾಗಿದೆ.

೨೦೦೬ ಜೂನ್ ತಿಂಗಳಿನವರೆಗೂ, ಭಾರತದಲ್ಲಿ ಸಂಸ್ಕೃತ ಮಾತ್ರ ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿತ್ತು. ಆದರೆ ಜೂನ್ ೬ ೨೦೦೬ ರಂದು ಆಗಿನ ರಾಷ್ಟ್ರಪತಿಗಳಾಗಿದ್ದ ಡಾ ಏ. ಪಿ. ಜೆ. ಅಬ್ದುಲ್ ಕಲಾಮ್ ರವರು ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಒದಗಿಸಿದರು. ಇದಾದ ನಂತರ, ಕನ್ನಡಿಗರು ಕನ್ನಡಕ್ಕೂ ಸಹ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಕೊಡಬೇಕೆಂದು ಹೋರಾಟ ಮಾಡಿದರು. ಹಲವಾರು ಕನ್ನಡಪರ ಸಂಘಟನೆಗಳು ಈ ಹೋರಾಟದಲ್ಲಿ ಪಾಲ್ಗೊಂಡವು. ಈ ಎಲ್ಲಾ ಹೋರಾಟಗಳಿಗೆ ಫಲ ದೊರೆತ ದಿನ ಇಂದು.

ಎಲ್ಲಾ ಕನ್ನಡಿಗರಿಗೂ ಈ ಶುಭ ಸಂದರ್ಭದಲ್ಲಿ ನನ್ನ ಎದೆಯಾಳದಿಂದ ಶುಭಾಶಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ನಮ್ಮ ಕನ್ನಡ ಭಾಷೆಯನ್ನೂ ಉಳಿಸೋಣ. ಬೆಳೆಸೋಣ.

ಕನ್ನಡಾಂಬೆಗೆ ಜೈ